Uncategorized

ಕೆಸರುಗದ್ದೆ ಕ್ರೀಡಾ ಕೂಟ – ಅಖಿಲ ಕೊಡವ ಸಮಾಜ ದ ಪ್ರಶಂಸೆ

ಕೆಸರುಗದ್ದೆ ಕ್ರೀಡಾ ಕೂಟ – ಅಖಿಲ ಕೊಡವ ಸಮಾಜ ದ ಪ್ರಶಂಸೆ

ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೊಡಗಿನ ಕೃಷಿ ಪರಂಪರೆ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗ್ರತಿ ಮೂಡಿಸಲು ಕಳೆದ ದಿ. 10-08-2024 ರಂದು ಬಿಟ್ಟಂಗಾಲದಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ವನ್ನು ಯಶಸ್ವಿಯಾಗಿ ನಡೆಸಿದ ಜಬ್ಬೂಮಿ ಸಂಚಾಲಕ ಶ್ರೀ ಚೊಟ್ಟೆಕ್'ಮಾಡ ರಾಜೀವ್ ಬೋಪಯ್ಯ ಮತ್ತು ತಂಡ ದವರನ್ನು ಅಖಿಲ ಕೊಡವ ಸಮಾಜ ದ ಅಧ್ಯಕ್ಷರಾದ ಶ್ರೀ ಪರದಂಡ ಸುಬ್ರಮಣಿ ಕಾವೇರಿಯಪ್ಪ ಮತ್ತು ಕೇಂದ್ರ ಸಮಿತಿ ಸದಸ್ಯರು ಪ್ರಶಂಸಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಹಲವು ಮನೋರಂಜಕ ಕ್ರೀಡೆ ಗಳೊಂದಿಗೆ ಜನಪ್ರಿಯ ವಾಗಲೆಂದು ಆಶಿಸಿದ್ದಾರೆ. ಪ್ರಕಟಣೆ: ಗೌ. ಕಾರ್ಯದರ್ಶಿ ಯವರಿಂದ